ಮುದ್ದಾದ ಪ್ರೇಮಕಥೆಯ ಚಿತ್ರ ಅಭಿರಾಮಚಂದ್ರ ರೇಟಿಂಗ್: 3/5 ***
Posted date: 06 Fri, Oct 2023 11:25:51 PM
ಚಿತ್ರ: ಅಭಿರಾಮಚಂದ್ರ
ನಿರ್ದೇಶನ : ನಾಗೇಂದ್ರ ಗಾಣಿಗ
ತಾರಾಗಣ: ರಥ ಕಿರಣ, ಸಿದ್ದು ಮೂಲಿಮನಿ, ನಾಟ್ಯರಂಗ, ಎಸ್. ನಾರಾಯಣ್, ನಾಗೇಂದ್ರ ಗಾಣಿಗ, ಸುಂದರ್ ವೀಣಾ, ವೀಣಾ ಸುಂದರ್ ಮತ್ತಿತರರು
ರೇಟಿಂಗ್:    3/5 ***

ಬಾಲ್ಯದ ಪ್ರೀತಿ, ಪ್ರೇಮದ ವಿಷಯಗಳನ್ನು ಮುಂದಿಟ್ಟುಕೊಂಡು ದೊಡ್ಡವರಾದ ನಂತರವೂ ಮುಂದುವುರಿಸಿರುವ ವಿಭಿನ್ನ ಪ್ರೇಮಕಥೆಯ ಚಿತ್ರ “ ಅಭಿರಾಮಚಂದ್ರ”.
 
ಮುದ್ದಾದ ಪ್ರೇಮಕಥೆಯನ್ನು ನಿರ್ದೇಶಕ ನಾಗೇಂದ್ರ ಗಾಣಿಗ ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಿದ್ದಾರೆ. ಕುಂದಾಪುರದ ಅಭಿ (ರಥಕಿರಣ)  ನಾಟಕದಲ್ಲಿ ತೊಡಗಿಸಿಕೊಂಡ, ರಾಮ, ಮಂಡ್ಯದ ಹೈದ ಕ್ಯಾಬ್ ಚಾಲಕ, ಚಂದ್ರ – (ನಾಟ್ಯ ರಂಗ) ರಾಯಚೂರಿನವ. ಹೋಟೆಲ್‍ನಲ್ಲಿ ಕ್ಯಾಶಿಯರ್, ರಾಜ್ಯದ ಬೇರೆ ಬೇರೆ ಭಾಗಗಳಿಂದ ಮಂದಿ ಬದುಕು ಕಟ್ಟಿಕೊಳ್ಳಲು ಬೆಂಗಳೂರಿನಲ್ಲಿ ಒಂದೇ ಕೊಠಡಿಯಲ್ಲಿ ಇದ್ದರು. ಜೊತೆಗೆ ಸ್ನೇಹಿತರು.
 
ಅಭಿ ಬಾಲ್ಯದಲ್ಲಿ ಮಾಡಿದ ಪ್ರೀತಿಯನ್ನು ದೊಡ್ಡವರಾದ ಮೇಲೆಯೂ ಅದನ್ನು ಕನವರಿಸುತ್ತಾನೆ. ಬಾಲ್ಯದ ಹುಡುಗಿ ಅರುಣಿಯ ಮೇಲೆ ಅತಿಯಾಗಿ ಪ್ರೀತಿ ಇಟ್ಟುಕೊಂಡ. ಇತ್ತು ರಾಮ, ತನ್ನೂರಿನ ವೈದ್ಯರ ಮಗಳಿಗೆ ಗಾಳ ಹಾಕಿದವ, ಇನ್ನೂ ಚಂದ್ರ ಪಬ್ ಜಿ ಹಾಡಿಕೊಂಡೇ ಅದರಲ್ಲಿ ಪರಿಚಯವಾದ ಹುಡುಗಿಯ ಮೇಲೆ ಪ್ರೀತಿ ಇಟ್ಟುಕೊಂಡವ.
 
ಒಂದೇ ಕೊಠಡಿಯಲ್ಲಿರುವ ಈ ಮೂರು ಹುಡುಗರು, ಪ್ರೀತಿ ಮಾಡುವ ಮನಸಾರೆ ಇಷ್ಟ ಹುಡುಗಿ ಒಬ್ಬಳೇ ಎನ್ನುವ ಸಂಗತಿ ಒಂದು ಹಂತದಲ್ಲಿ ರಿವೀಲ್ ಆಗುತ್ತದೆ. ಈ ಹಂತದಲ್ಲಿ ಸ್ನೇಹಿತರು ನಡೆ ಏನಾಗಿರಲಿದೆ. ಮೂರು ಮಂದಿ ಹುಡುಗರು ಒಬ್ಬಳೇ ಹುಡುಗಿಯನ್ನು ಪ್ರೀತಿ ಮಾಡ್ತ ಇದ್ದರಾ ಅಥವಾ ಬೇರೆ ಬೇರೆ ಹುಡುಗಿಯಾ ಎನ್ನುವುದನ್ನು ಚಿತ್ರದಲ್ಲಿ ನೋಡಬೇಕು ನಾಯಕ ಕಮ್ ನಿರ್ಮಾಪಕ ರಥ ಕಿರಣ ತಮ್ಮ  ಮುಗ್ದತೆಯಿಂದಲೇ ಗಮನ ಸೆಳೆದಿದ್ದಾರೆ. ಸಿದ್ದುಮೂಲಿಮನಿ, ನಾಟ್ಯರಂಗ ಅವರೂ ತಮ್ಮ ಹಾವ ಭಾವ ಮಾತಿನಿಂದ ಪ್ರೇಕ್ಷಕರಿಗೆ ಇಷ್ಟವಾಗುತ್ತಾರೆ. ಇನ್ನೂ ಎಸ್ ನಾರಾಯಣ್, ಸುಂದರ್ ವೀಣಾ, ವೀಣಾ ಸುಂದರ್ ಹಾಗೆ ಬಂದು ಹೀಗೆ ಹೋಗುವ ಪಾತ್ರ.
ಬಾಲ್ಯದಲ್ಲಿ ಮಕ್ಕಳ ಪ್ರೀತಿಯನ್ನು ನಿರ್ದೇಶಕರು ಅಗತ್ಯಕ್ಕಿಂತ ಹೆಚ್ಚಾಗಿಯೇ ತೋರಿಸಿದ್ದಾರೆ. ಅದನ್ನು ತುಸು ಕಡಿಮೆ ಮಾಬಹುದಿತ್ತು, ಪೋಷಕರು ತಮ್ಮ ಮಕ್ಕಳೊಂದಿಗೆ ಸಿನಿಮಾ ನೋಡಿದರೆ ಮುಜುಗರ ಅನುಭವಿಸುವ ಸಾದ್ಯತೆ ಇದೆ. ಅಷ್ಟೊಂದು ಮಕ್ಕಳ ಪ್ರೀತಿಯನ್ನು ಎಳೆಯುವ ಅಗತ್ಯ ಇರಲಿಲ್ಲ.
 
ಉಳಿದಂತೆ ಉತ್ತಮ ಕಥೆಯನ್ನು ಮುಂದಿಟ್ಟುಕೊಂಡು ಸಿನಿಮಾ ಮಾಡಲಾಗಿದೆ. ವಿಭಿನ್ನ ಅಭಿರುಚಿಯ ಚಿತ್ರ ಪ್ರೇಕ್ಷಕರಿಗೆ ಇಷ್ಟವಾಗಲಿದೆ.vv
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed